ಬಿಚ್ಚುಗನ್ನಡದಿ ಬರೆವ ಕವಿತೆಗಳ ಕಂಡು
ಕಟ್ಟಳೆಗೆಟ್ಟ ಕುಲಗೇಡಿಯೆಂಬಭಿಧಾನವಿತ್ತು
ಮನಸಾರೆ ನಗುವಿಯೇತಕೆ ಅಣ್ಣ? ನೀ
ನಗುವಿಯೆಂಬುದ ಮರೆತು ನಾ ಕವಿತ ಕಟ್ಟಿಲ್ಲ.
ನೀ ‘ಕವಿತೆ’ಯೆನಲೆಂದು ಕವಿತೆ ಬರೆದಿಲ್ಲ.
ಕವಿಕಂಠೀರವರ ಕೀರ್ತಿಯನೆ ಬಯಸಿಲ್ಲ.
ನನ್ನೆದೆಯ ದನಿ ನುಡಿಸಿದುದ ಮೂಡಿಸಿದೆ.
ಜೀವನದುಸಿರು ಭಾವದಿ ಬೆರೆತು ಹಾಡಿದುದು.
ಭೂಗರ್ಭವನೆ ಸೀಳಿ, ಭೂತಲ ಕಂಡು
ಬೀಜಗಳ ಬಿತ್ತಿ ಬೆಳೆಕೊಂಡು, ಜಗದ ಬಾ-
ಯ್ಗಿಟ್ಟು, ಹೊಟ್ಟೆಗಿಲ್ಲದೆ ಕೆಟ್ಟು, ಕಣ್ಣೀರ
ಸುರಿಸುತಿಹ ಕಂಗಾಲನೊಡಲನೊಳಸೇರಿ
ನೆತ್ತರದ ನಾಡಿಗಳನದುಮಿ ದನಿಗುಡಿಸಿ
ಹಾಡಿದೆನು; ಹಾಡುತಿಹೆ; ಹಾಡುವೆನು.
ಅಪರಾಧಮೇನಿದರೊಳಗೆ ನಗುವ ಅಣ್ಣ?
ಕವನದ ಗುಟ್ಟು ಕಟ್ಟಿನೊಳಗಿಲ್ಲವೆಂಬುದ-
ನರಿದು ನಿರ್ಬಲರ ನಗುವ ನಿಲ್ಲಿಸಿ ಬಾ ಸಡ್ಡು-
ಹೊಡೆ. ನನಗು ಮಿಗಿಲೆನಿಪ ಕವಿತೆಗಳ
ಕಟ್ಟು. ಆಗೆನ್ನ ಕಂಡು ಮನದಣಿಯೆ
ನಗು; ನಿನ್ನ ನಗುವಿಗೆ ಬಹುದು ಬೆಲೆ.
*****
Related Post
ಸಣ್ಣ ಕತೆ
-
ಬೂಬೂನ ಬಾಳು
ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…
-
ಮಲ್ಲೇಶಿಯ ನಲ್ಲೆಯರು
ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…
-
ಬಿರುಕು
ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್ತಿ ಬೆಚ್ಚಿ… Read more…
-
ಧರ್ಮಸಂಸ್ಥಾಪನಾರ್ಥಾಯ
ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…
-
ಮಿಂಚು
"ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…